http://www.youtube.com/watch?v=LmLvRvP6CFk&feature=relatedhttp://www.youtube.com/watch?v=y7xBfvJ54kM
http://www.youtube.com/watch?v=LmLvRvP6CFk&feature=related
೧೦ ವರ್ಷಗಳ ನಂತರದ ಶ್ರಮಕ್ಕೆ ಪ್ರತಿಫಲವಾಗಿ ಕಡೆಗೂ ಸೂಪರ್ ಸಿನಿಮಾದ ನಟನೆ ಹಾಗೂ ನಿರ್ಧೇಶನದ ಮೂಲಕ ಬ್ರೇಕ್ ದಕ್ಕಿಸಿಕೊಂಡ ರಿಯಲ್ ಸ್ಟಾರ್ ಉಪೇಂದ್ರರವರಿಗೆ ಜವಾಬ್ದಾರಿ ಹೆಚ್ಚಿದ್ದರೂ ಬಿಡುವು ಮಾಡಿ ಕೊಂಡಾದರೂ ತಮ್ಮ ಅಭಿಮಾನಿಗಳಲ್ಲೋಬ್ಬರಾದ ಅಪ್ಪು ಪುನೀತ್ ರವರ ಚಿತ್ರವನ್ನು ಕನಿಷ್ಠ ಪಕ್ಷ ಒಮ್ಮೆಯಾದರೂ ತಮ್ಮ ನಿರ್ಧೇಶನದ ಮೂಲಕ ನೋಡಬಯಸಿ ಕರ್ನಾಟಕಾ೦ಧ್ರ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪ್ರತಿನಿಧಿಗಳಾಗಿ ಕೋರಿಕೆ ಸಲ್ಲಿಸುತ್ತಿದ್ದೇವೆ.
ಕೆಲದಿನಗಳಿ೦ದೀಚೆಗೆ ಕನ್ನಡ ಚಿತ್ರರಂಗ ಕನ್ನಡ ಚಿತ್ರಗಳು ಪ್ರಕಾಶಿಸುತ್ತಿವೆ ಎಂದರೆ ತಪ್ಪಾಗಲಾರದು ತೀರ ಇತ್ತೀಚಿನ ಸೂಪರ್ ಸಿನಿಮಾವನ್ನೇ ತೆಗೆದುಕೊಳ್ಳಿ ಅದು ಮಾಡುತ್ತಿರುವ ಹೈಪ್ /ಕ್ರೇಜ್ ನೋಡಿದರೆ ಎಂಥವರನ್ನು ಅದೇನಿದೆಯೋ ನೋಡಬೇಕು ಎಂದು ಸೆಳೆಯುವ ಪ್ರಚಾರ ತಂತ್ರಗಾರಿಕೆ ಹಾಗೂ ಹತ್ತು ವರ್ಷಗಳ ನಂತರ ಉಪೇಂದ್ರ ಅವರ ನಿರ್ಧೇಶನವಾಗಿರುವುದರಿಂದಲೂ ಹೆಚ್ಚು ಸುದ್ದಿ ಮಾಡಿತು ಮತ್ತು ಆಧಾಯ ಕಾಣುವ ನಿರೀಕ್ಷೆಯನ್ನು ಹುಟ್ಟಿಸಿದೆ ಕೂಡ. ಪತ್ರಿಕೆಗಳು, ಜನರು, ಅಭಿಮಾನಿಗಳು ಹೇಳುತ್ತಿರುವ ಪ್ರಕಾರ ಒಮ್ಮೆಯಾದರೂ ಈ ೧೦ ವರ್ಷದ ನಂತರದ ನಿರ್ಧೇಶನದ ಚಿತ್ರವನ್ನು ನೋಡಲೇಬೇಕೆಂಬ ಆಶೆ ಹುಟ್ಟಿಸುತ್ತಿರುವುದನ್ನು ತಳ್ಳಿಹಾಕುವಂತಿಲ್ಲ. ಇಂಥ ರೀತಿಯ ಹೈಪ್ ಕ್ರಿಯೇಟ್ ಮಾಡುವುದರಲ್ಲಿ ಸಿದ್ದಹಸ್ತರೆಂದೆ ಹೆಸರುವಾಸಿಯಾಗಿರುವ ಮತ್ತೊಬ್ಬ ನಿರ್ಧೇಶಕ ಜೋಗಿ ಪ್ರೇಂ. ಕರ್ನಾಟಕದಲ್ಲಿ ಸದಾ ಪುನೀತ್ ಚಿತ್ರಗಳಿಗಿರುವ ಹೈಪ್/ಕ್ರೇಜ್ ಹಾಗೊಮ್ಮೆ ಹೀಗೊಮ್ಮೆ ಕೆಲ ಚಿತ್ರಗಳಲ್ಲಿ ಕಾಣಸಿಗುತ್ತದೆ. ಅದು ಅಪ್ಪುವಿಗೂ ಇಷ್ಟವಾಗುವ ನಟ ನಿರ್ಧೇಶಕ ಉಪೇಂದ್ರ ಅವರ ಸೂಪರ್ ಮೂಲಕ ಮತ್ತೆ ಸಾದ್ಯವಾಗಿರುವುದಕ್ಕೆ ಸಂತೋಷವಾಗಿದೆ ಈ ಸಂತಸಕ್ಕೆ ಮತ್ತೊಂದು ಮಹತ್ತರ ಅಂಸವೆಂದರೆ 'ಸೂಪರ್' ರಾಕ್ ಲೈನ್ ಪ್ರೋಡಕ್ಸನ್ ರವರ ೨೫ನೆ ಚಿತ್ರವಾದ್ದರಿಂದಲೂ ಕೂಡ. ಆದ್ದರಿಂದ ಅದ್ದೂರಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಹಾಗೂ ಇದೆ ರೀತಿಯ ಹೈಪ್/ಕ್ರೇಜ್ ಈಗಾಗಲೇ ಶಿವಣ್ಣನ ಮೈಲಾರಿಗೂ ಮುಂದುವರೆದಿರುವುದೂ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಇದರಿಂದ ತಾಜ್ಮಹಲ್ ನ ಚಂದ್ರುರವರೂ ಕೂಡ ಹೈಪ್ ಕ್ರಿಯೇಟ್ ಮಾಡಬಲ್ಲರು ಎಂಬುದು ಸಾಭೀತಾಯಿತು. ಬಹುಸಹ 'ಮೈಲಾರಿ' ಎಂಬ ಶೀರ್ಷಿಕೆಯೇ ಅಷ್ಟು ಹೈಪ್ ಕ್ರಿಯೇಟ್ ಆಗಲು ಸಹಕಾರ ನೀಡಿರಲೂಬಹುದು. ಇಂಥಹ, ಅಂಥಹ ಹೈಪ್ ಗಳ ನಡುವೆಯೂ ಹೈಪಿದ್ದರೂ ಅದರ ಶಬ್ದದ ಸದ್ದಿಲ್ಲದೇ ನಿಶಬ್ದವಾಗಿ ಮುನ್ನುಗ್ಗುತ್ತಿರುವ ಏಕೈಕ ಕನ್ನಡ ಚಿತ್ರವೆಂದರೆ ಸೂರಿಯವರ " ಜಾಕಿ " ಎನ್ನುವುದು ಅತಿಶಯೋಕ್ತಿಯಲ್ಲ. ಕನ್ನಡ ಚಿತ್ರಗಳನ್ನು ಮತ್ತಷ್ಟು ಅವಲೋಕಿಸಿದರೆ ಕಣ್ಮುಂದೆ ಬರುವುದು ಕೆಲ ಚಿತ್ರಗಳು ಪ್ರಾರ೦ಭದಲ್ಲಿ ಎಗ್ಗಿಲ್ಲದೆ ಸದ್ದು ಮಾಡಿ ಮಲಗುತ್ತವೆ, ಕೆಲ ಚಿತ್ರಗಳು ಸದ್ದೇ ಮಾಡದೆ ಶುರುವಾಗಿ ಕೆಲವಾರಗಳ ನಂತರ ಸದ್ದು ಮಾಡಲು ಶುರುಮಾಡುತ್ತವೆ ಆದರೆ ಪುನೀತ್ ಅವರ ಚಿತ್ರಗಳು ಆರಕ್ಕೆರಿದರೂ/ಒಮ್ಮೊಮ್ಮೆ ಏರದಿದ್ದರೂ, ಮೂರಕ್ಕಿಲಿಯುವ ಮಟ್ಟಕ್ಕೆ ಕಳಪೆಯಾಗಿರದೆ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಿರುತ್ತವೆ ಹಾಗೂ ಸುಸ್ಥಿರತೆಗೆ ಪ್ರಾಮುಖ್ಯತೆ ಕೊಟ್ಟು ನಿರ್ಮಾಣಗೊಂಡಿರುತ್ತವೆ ಹಾಗಾಗಿ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸುಸ್ಥಿರತೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತವೆ. ಆದ್ದರಿಂದಲೇ ಪುನೀತ್ರನ್ನು ಭಾರತದ ಕಾರ್ಪೋರೇಟ್ ವಲಯದವರು "ಸುಸ್ಥಿರ ತಾರೆ" ಎಂದು ಬಣ್ಣನೆ ಮಾಡುತಾರೆ ಇದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಕೊಡುಗೆಯಲ್ಲವೇ .
ಅಪ್ಪುವಿನ ರಾಯಲ್ ಲುಕ್ ಇರುವ ಈ ದಿನದ ವಿಜಯ ನೆಕ್ಸ್ಟ್ ವಾರದ ಪತ್ರಿಕೆಯ ಮುಖ ಪುಟ ನೋಡಿ ಖುಸಿಯಾಗಿ ಇಲ್ಲಿಗೆ ಇಳಿಸಿದೆನು ಒಂದು ಆಂಗಲ್ ನಲ್ಲಿ ಸವಾರಿಯ ರಘುಮುಖರ್ಜಿಯನ್ನು ನೆನಪಿಸುತ್ತಾರೆ ಆಲ್ವಾ?
